– ಬೃಹತ್ ವೈದ್ಯಕೀಯ ಶಿಬಿರ ‘ವೈದ್ಯಕೀಯ ಶಿಬಿರದಿಂದ ಸಾಮಾಜಿಕ ಸಾಮರಸ್ಯ’
ಪುಂಜಾಲಕಟ್ಟೆ ಜ. 31: ಬಂಟ್ವಾಳ ತಾ| ಪಿಲಾತಬೆಟ್ಟು ಗ್ರಾಮದ ನಯನಾಡು ಎನ್.ಜಿ. ಚಾರಿಟೆಬಲ್ ಟ್ರಸ್ಟ್ನ ಆಶ್ರಯದಲ್ಲಿ ಶ್ರೀ ರಾಮ ಯುವಕ ಸಂಘ ನಯನಾಡು, ಭಾರತೀಯ ಕೆಥೋಲಿಕ್ ಯುವ ಸಂಚಲನ ನಯನಾಡು ಘಟಕ ಇದರ ಸಹಯೋಗದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಹಾಗೂ ಕೆ.ಎಂ.ಸಿ. ಯ ಸಮುದಾಯ ದಂತ ಆರೋಗ್ಯ ವಿಭಾಗದ ವೈದ್ಯರ ತಂಡದಿಂದ ಬೃಹತ್ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರ ನಯನಾಡು ಸಂತ ಜೋಸೆಫರ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಜರಗಿತು.
ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಹ್ಯುಮೇನಿಟಿ ಫೌಂಡೇಶನ್ನ ಸಂಸ್ಥಾಪಕ ರೋಶನ್ ಡಿ’ಸೋಜಾ ಬೆಳ್ಮಣ್ ಅವರು ಉದ್ಘಾಟಿಸಿ, ಶ್ರೀ ರಾಮ ಯುವಕ ಸಂಘ ಹಾಗೂ ಕೆಥೋಲಿಕ್ ಯುವ ಸಂಚಾಲನ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವು ಸಮಾಜದ ಸಾಮರಸ್ಯಕ್ಕೆ ಮಾದರಿಯಾಗಿದೆ ಎಂದರು.
ನಯನಾಡು ಸಂತ ಅಸ್ಸಿಸಿ ಚರ್ಚ್ ಧರ್ಮಗುರು ವಂ| ಸಂತೋಷ್ ಮಿನೆಜಸ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಮೋಂತಿ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಕುಮಂಗಿಲ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಸೈಮನ್ ಮೋರಾಸ್, ಎನ್.ಜಿ. ಟ್ರಸ್ಟ್ ನ ಸಂಸ್ಥಾಪಕ ನವೀನ್ ಅರುಣ್ ಗಲ್ಬಾಂವೋ, ಭಾರತೀಯ ಕೆಥೋಲಿಕ್ ಯುವ ಸಂಚಲನ ನಯನಾಡು ಘಟಕದ ಅಧ್ಯಕ್ಷ ಅಲೆನ್ ಡಿ’ಸೋಜಾ, ಶ್ರೀರಾಮ ಯುವಕ ಸಂಘದ ಅಧ್ಯಕ್ಷ ದಯಾನಂದ್ ನಿನ್ನಿಕಲ್ಲು, ಗ್ರಾ.ಪಂ. ಸದಸ್ಯ, ಯುವಕ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ ನಿನ್ನಿಕಲ್ಲು, ಕೆ.ಎಂ.ಸಿ.ಯ ನೇತ್ರತಜ್ಞ ಡಾ| ಕೀರ್ತನ್ ರಾವ್, ಐ.ಸಿ.ವೈ.ಎಂ. ನ ನಿರ್ದೇಶಕ ವಂ| ರೊನಾಲ್ಡ್ ಪ್ರಕಾಶ್ ಡಿ’ಸೋಜಾ, ಅಧ್ಯಕ್ಷ ಜೈಸನ್ ಪಿರೇರಾ ಹಾಗೂ ಕಾರ್ಯದರ್ಶಿ ಫೆವಿಷಾ ಮೊಂತೆರೊ ಉಪಸ್ಥಿತರಿದ್ದರು.
ಸಹಾಯಧನ, ಸಮ್ಮಾನ
ರಸ್ತೆ ಅಪಘಾತಕ್ಕಿಡಾಗಿ ಮೃತಪಟ್ಟ ರವೂಫ್ ನೇರಳಕಟ್ಟೆ ಅವರ ಮನೆಯವರಿಗೆ ಎನ್.ಜಿ. ನಯನ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಿಸಲಾಯಿತು. ಸಮಾಜ ಸೇವಕ ರೋಶನ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು. ಶಿಬಿರದಲ್ಲಿ 221 ಮಂದಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು 53 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ 38 ಮಂದಿ ಭಾಗವಹಿಸಿದ್ದರು.
ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ಸೈಮನ್ ಮೋರಸ್ ಸ್ವಾಗತಿಸಿ, ಯುವಕ ಸಂಘದ ಸದಸ್ಯ ಹರೀಶ್ ಶೆಟ್ಟಿ ನಯನಾಡು ನಿರೂಪಿಸಿದರು.